ಯಾದಗಿರಿ ಜಿಲ್ಲೆಯ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಎಲ್ಲಾ ಅಂಕಣಗಳನ್ನು ತುಂಬಿ, ಅರ್ಜಿಯ ಜೊತೆಗೆ ದಾಖಲಾತಿಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಲಗತ್ತಿಸಿ ಪೋಸ್ಟ್ ಮುಖಾಂತರ ಕೊನೆಯ ದಿನಾಂಕದ ಒಳಗಾಗಿ ಸಲ್ಲಿಸತಕ್ಕದ್ದು.
Karnataka Govt. Jobs Recruitment Notification:
Karnataka District Court Recruitment 2019-20 : Application invited for the posts of TYPIST, TYPIST-COPYIST, PEON in Yadgir Session Court.
Job Searching Keywords: Karnataka Govt. Jobs, Karnataka Jobs, peon recruitment, typist jobs, Yadgir court job, Yadgir jobs, typist-copyist recruitment.
ಹುದ್ದೆಗಳ ವಿವರಗಳು
- ಬೆರಳಚ್ಚುಗಾರರು
- ಒಟ್ಟು ಹುದ್ದೆ: 08 (ಹೈ.ಕ-6+ ಉ.ವೃ-02)
- ವೇತನ ಶ್ರೇಣಿ : ರೂ. 21400 – ರೂ. 42000 ಹಾಗೂ ಇತರೆ ಭತ್ಯೆಗಳು
- ಶೈಕ್ಷಣಿಕ ವಿದ್ಯಾರ್ಹತೆ :
- ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
- ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಯಲ್ಲೂ ಹಿರಿಯ ಶ್ರೇಣಿ ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆ ಅಥವಾ ತತ್ಸಮಾನ ವಿದ್ಯಾರ್ಹತೆ.
- ಬೆರಳಚ್ಚು-ನಕಲುಗಾರರು (ಹೈ.ಕ. ಮೀಸಲಾತಿ)
- ಹುದ್ದೆಗಳ ಸಂಖ್ಯೆ : 05
- ವೇತನ ಶ್ರೇಣಿ : ರೂ. 21400 – ರೂ. 42000 ಹಾಗೂ ಇತರೆ ಭತ್ಯೆಗಳು
- ಶೈಕ್ಷಣಿಕ ವಿದ್ಯಾರ್ಹತೆ :
- ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಯಲ್ಲೂ ಕಿರಿಯ ಶ್ರೇಣಿ ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆ ಅಥವಾ ತತ್ಸಮಾನ ವಿದ್ಯಾರ್ಹತೆ.
- ಜವಾನರು(ಸಿಪಾಯಿ)
- ಒಟ್ಟು ಹುದ್ದೆ: 05
- ವೇತನ ಶ್ರೇಣಿ : ರೂ. 17000 – ರೂ. 28950 ಹಾಗೂ ಇತರೆ ಭತ್ಯೆಗಳು
- ಶೈಕ್ಷಣಿಕ ವಿದ್ಯಾರ್ಹತೆ :
- 7 ನೇ ತರಗತಿ ಪರೀಕ್ಷೆಯಲ್ಲಿ ಉತ್ತಿರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ
- ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು.
ವಯೋಮಿತಿ :
- ಕನಿಷ್ಠ : 18 ವರ್ಷ
- ಗರಿಷ್ಠ :
- ಸಾಮಾನ್ಯ ವರ್ಗ : 35 ವರ್ಷ
- ಪ್ರವರ್ಗ 2ಎ, 2ಬಿ, 3ಎ, 3ಬಿ : 38 ವರ್ಷ
- ಪ. ಜಾತಿ, ಪ. ಪಂಗಡ ಮತ್ತು ಪ್ರವರ್ಗ 1 : 40 ವರ್ಷ
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು :
- ನಿಗದಿತ ನಮೂನೆಯ ಅರ್ಜಿಯಲ್ಲಿ ಎಲ್ಲಾ ಅಂಕಣಗಳನ್ನು ಭರ್ತಿ ಮಾಡಿ ಸಲ್ಲಿಸತಕ್ಕದ್ದು.
- ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿ ನಮೂನೆಯಲ್ಲಿ ತೋರಿಸಿರುವ ಸ್ಥಳದಲ್ಲಿ ಅಂಟಿಸಿ ಅದರ ಮೇಲೆ ಸಹಿ ಮಾಡತಕ್ಕದ್ದು,
- ವಿದ್ಯಾರ್ಹತೆಯ ಬಗೆಗಿನ ಅಂಕಪಟ್ಟಿಗಳ ನಕಲು ಪ್ರತಿ
- ಜನ್ಮ ದಿನಾಂಕದ ದೃಢೀಕರಣಕ್ಕಾಗಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ/ವರ್ಗಾವಣೆ ಪತ್ರ/ಇತರೇ ಅಧಿಕೃತ ದಾಖಲಾತಿ
- ಜಾತಿ ಮೀಸಲಾತಿ ಕೋರುವ ಅಭ್ಯರ್ಥಿಗಳು ತಾವು ಕೋರುವ ಮೀಸಲಾತಿ ಬಗೆಗಿನ ಪ್ರಮಾಣಪತ್ರ
- ಇತರೆ ಮೀಸಲಾತಿ ಕೋರುವ ಅಭ್ಯರ್ಥಿಗಳು ತಾವು ಕೋರುವ ಮೀಸಲಾತಿ ಬಗೆಗಿನ ಪ್ರಮಾಣಪತ್ರತ
- ತಾವು ವ್ಯಾಸಂಗ ಮಾಡಿದ ವಿದ್ಯಾಸಂಸ್ಥೆಯ ಮುಖ್ಯೋಪಾದ್ಯಾಯರು/ಪ್ರಾಂಶುಪಾಲರಿಂದ ಪಡೆದ ನಡತೆ ಪ್ರಮಾಣಪತ್ರ
- ಸಮಾಜದ ಇಬ್ಬರು ಗಣ್ಯ ವ್ಯಕ್ತಿಗಳಿಂದ ತಮ್ಮ ನಡತೆ ಪ್ರಮಾಣಪತ್ರ (ಮುಖ್ಯೋಪಾದ್ಯಾಯರು/ಪ್ರಾಂಶುಪಾಲರಿಂದ ಹೊರತು ಪಡಿಸಿ)
- ಅಭ್ಯರ್ಥಿ ಗಳು ಅರ್ಜಿಯ ಜೊತೆಯಲ್ಲಿ 5.00 ರೂ.ಗಳ ಅಂಚೆ ಚೀಟಿ ಲಗತ್ತಿಸಿರುವ ಸ್ವವಿಳಾಸವಿರುವ ಲಕೋಟೆಯನ್ನು ಲಗತ್ತಿಸತಕ್ಕದ್ದು ಹಾಗೂ ಲಕೋಟೆಯ ಮೇಲೆ ಯಾವ ಹುದ್ದೆಗೆ ಎಂದು ಕಡ್ಡಾಯವಾಗಿ ನಮೂದಿಸತಕ್ಕದ್ದು.
ಅರ್ಜಿ ಸಲ್ಲಿಸಬೇಕಾದ ವಿಳಾಸ :
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರವರ ನ್ಯಾಯಾಲಯ
ಯಾದಗಿರಿ ಜಿಲ್ಲೆ
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 15.02.2019 ಸಂಜೆ 5.00 ಗಂಟೆ
ನೇಮಕಾತಿ ಪ್ರಕಟಣೆಗಳು
- ಬೆರಳಚ್ಚುಗಾರರು & ಬೆರಳಚ್ಚು-ನಕಲುಗಾರರು : ಇಲ್ಲಿ ಕ್ಲಿಕ್ಕಿಸಿ
- ಜವಾನರು(ಸಿಪಾಯಿ) : ಇಲ್ಲಿ ಕ್ಲಿಕ್ಕಿಸಿ
ಅರ್ಜಿ ನಮೂನೆಗಳು
- ಬೆರಳಚ್ಚುಗಾರರು : ಇಲ್ಲಿ ಕ್ಲಿಕ್ಕಿಸಿ
- ಬೆರಳಚ್ಚು-ನಕಲುಗಾರರು : ಇಲ್ಲಿ ಕ್ಲಿಕ್ಕಿಸಿ
- ಜವಾನರು(ಸಿಪಾಯಿ) : ಇಲ್ಲಿ ಕ್ಲಿಕ್ಕಿಸಿ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.