ಬೆಂಗಳೂರು ಲಘು ವ್ಯವಹಾರಗಳ ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಪಡೆದುಕೊಂಡು ಎಲ್ಲಾ ಅಂಕಣಗಳನ್ನು ತುಂಬಿ, ಅರ್ಜಿಯ ಜೊತೆಗೆ ದಾಖಲಾತಿಗಳ ಸ್ವಯಂ ದೃಢೀಕೃತ ನಕಲು ಪ್ರತಿಗಳನ್ನು ಲಗತ್ತಿಸಿ ಪೋಸ್ಟ್ ಮುಖಾಂತರ ಕೊನೆಯ ದಿನಾಂಕದ ಒಳಗಾಗಿ ಸಲ್ಲಿಸತಕ್ಕದ್ದು.
Karnataka Govt. Jobs Recruitment Notification:
Karnataka District Court Recruitment 2019-20 : Application invited for the posts of TYPIST, TYPIST-COPYIST, PEON in Chief Judge, Court of Small Causes, Bangalore
Job Searching Keywords: Karnataka Govt. Jobs, Karnataka Jobs, peon recruitment, typist jobs, Bangalore court job, Bangalore jobs, typist-copyist jobs, Bangalore court notification
ಹುದ್ದೆಗಳ ವಿವರಗಳು :
- ಬೆರಳಚ್ಚುಗಾರರು
- ಒಟ್ಟು ಹುದ್ದೆ: 09
- ವೇತನ ಶ್ರೇಣಿ : ರೂ. 21400 – ರೂ. 42000
- ಶೈಕ್ಷಣಿಕ ವಿದ್ಯಾರ್ಹತೆ :
- ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
- ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಯಲ್ಲೂ ಹಿರಿಯ ಶ್ರೇಣಿ ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆ ಅಥವಾ ತತ್ಸಮಾನ ವಿದ್ಯಾರ್ಹತೆ.
- ಬೆರಳಚ್ಚು–ನಕಲುಗಾರರು
- ಹುದ್ದೆಗಳ ಸಂಖ್ಯೆ : 15
- ವೇತನ ಶ್ರೇಣಿ : ರೂ. 21400 – ರೂ. 42000
- ಶೈಕ್ಷಣಿಕ ವಿದ್ಯಾರ್ಹತೆ :
- ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ಕನ್ನಡ ಮತ್ತು ಆಂಗ್ಲ ಎರಡೂ ಭಾಷೆಯಲ್ಲೂ ಕಿರಿಯ ಶ್ರೇಣಿ ಬೆರಳಚ್ಚು ಪರೀಕ್ಷೆಯಲ್ಲಿ ತೇರ್ಗಡೆ ಅಥವಾ ತತ್ಸಮಾನ ವಿದ್ಯಾರ್ಹತೆ.
- ಸೇವಕರು/ಜವಾನರು
- ಒಟ್ಟು ಹುದ್ದೆ: 08
- ವೇತನ ಶ್ರೇಣಿ : ರೂ. 17000 – ರೂ. 28950
- ಶೈಕ್ಷಣಿಕ ವಿದ್ಯಾರ್ಹತೆ :
- 7 ನೇ ತರಗತಿ ಪರೀಕ್ಷೆಯಲ್ಲಿ ಉತ್ತಿರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ
- ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು.
ವಯೋಮಿತಿ :
- ಕನಿಷ್ಠ : 18 ವರ್ಷ
- ಗರಿಷ್ಠ :
- ಸಾಮಾನ್ಯ ವರ್ಗ : 35 ವರ್ಷ
- ಪ್ರವರ್ಗ 2ಎ, 2ಬಿ, 3ಎ, 3ಬಿ : 38 ವರ್ಷ
- ಪ. ಜಾತಿ, ಪ. ಪಂಗಡ ಮತ್ತು ಪ್ರವರ್ಗ 1 : 40 ವರ್ಷ
ಅರ್ಜಿ ಶುಲ್ಕ :
ಅಭ್ಯರ್ಥಿಯು ಅರ್ಜಿಯೊಂದಿಗೆ ಭಾರತೀಯ ಪೋಸ್ಟಲ್ ಆರ್ಡರ್ ಗಳನ್ನು ಮಾತ್ರ ವಿಲೇಖನಾಧಿಕಾರಿಗಳು, ಲಘು ವ್ಯವಹಾರಗಳ ನ್ಯಾಯಾಲಯ, ಬೆಂಗಳೂರು ಇವರ ಹೆಸರಿಗೆ ಪಡೆದು ಸಲ್ಲಿಸಬೇಕು.
- ಸಾಮಾನ್ಯ ವರ್ಗ , ಪ್ರವರ್ಗ 2ಎ, 2ಬಿ, 3ಎ, ಹಾಗೂ 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ : ರೂ. 200
- ಪ. ಜಾತಿ, ಪ.ಪಂಗಡ ಹಾಗೂ ಪ್ರವರ್ಗ 1ರ ಅಭ್ಯರ್ಥಿಗಳಿಗೆ : ರೂ. 50
ಸೂಚನೆ :
- ಅರ್ಜಿ ನಮೂನೆಯನ್ನು ಬೆಳಿಗ್ಗೆ 11.00-ಸಂಜೆ 4.00 ರ ಒಳಗೆ ಲಘು ವ್ಯವಹಾರಗಳ ನ್ಯಾಯಾಲಯದ ಕಛೇರಿಯ ವೇಳೆಯಲ್ಲಿ ರೂ.10 ಶುಲ್ಕ ನೀಡಿ ಅರ್ಜಿಯನ್ನು ಪಡೆಯಬಹುದು.
- ಬೆಂಗಳೂರು ಹೊರತುಪಡಿಸಿ ಉಳಿದ ಸ್ಥಳಗಳ ಅಭ್ಯರ್ಥಿಗಳು ಅಂಚೆಯ ಮೂಲಕ 10 ರೂ.ಗಳ ಪೋಸ್ಟಲ್ ಆರ್ಡರ್ ಮತ್ತು ಸ್ವ-ವಿಳಾಸ ಇರುವ ಲಕೋಟೆಗೆ ರೂ.5ರ ಅಂಚೆ ಚೀಟಿಯನ್ನು ಅಂಟಿಸಿ ಕಳುಹಿಸಿ ಅರ್ಜಿಯನ್ನು ಪಡೆಯಬಹುದು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು :
- ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ವಿದ್ಯಾರ್ಹತೆಯ ಬಗೆಗಿನ ಅಂಕಪಟ್ಟಿಗಳ ನಕಲು ಪ್ರತಿ
- ಜನ್ಮ ದಿನಾಂಕದ ದೃಢೀಕರಣಕ್ಕಾಗಿ ಎಸ್.ಎಸ್.ಎಲ್.ಸಿ ಅಂಕಪಟ್ಟಿ/ ವರ್ಗಾವಣೆ ಪತ್ರ / ಇತರೇ ಅಧಿಕೃತ ದಾಖಲಾತಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಮೀಸಲಾತಿ ಕೋರುವ ಅಭ್ಯರ್ಥಿಗಳು ತಾವು ಕೋರುವ ಮೀಸಲಾತಿ ಬಗೆಗಿನ ಪ್ರಮಾಣಪತ್ರತ
- ತಾವು ವ್ಯಾಸಂಗ ಮಾಡಿದ ವಿದ್ಯಾಸಂಸ್ಥೆಯ ಮುಖ್ಯೋಪಾದ್ಯಾಯರು/ಪ್ರಾಂಶುಪಾಲರಿಂದ ಪಡೆದ ನಡತೆ ಪ್ರಮಾಣಪತ್ರ
- ಸಮಾಜದ ಇಬ್ಬರು ಗಣ್ಯ ವ್ಯಕ್ತಿಗಳಿಂದ ತಮ್ಮ ನಡತೆ ಪ್ರಮಾಣಪತ್ರ (ಮುಖ್ಯೋಪಾದ್ಯಾಯರು/ಪ್ರಾಂಶುಪಾಲರಿಂದ ಹೊರತು ಪಡಿಸಿ)
- ಭರ್ತಿ ಮಾಡಿದ ಅರ್ಜಿ, ಸ್ವಯಂ ದೃಢೀಕರಿಸಿದ ನಕಲು ಪ್ರತಿ ಅಡಕಗಳೊಂದಿಗೆ ಅಭ್ಯರ್ಥಿಗಳು ಸ್ವ-ವಿಳಾಸ ಬರೆದು ರೂ.5ರ ಅಂಚೆಚೀಟಿಯನ್ನು ಲಗತ್ತಿಸಿ ಸಲ್ಲಿಸತಕ್ಕದ್ದು.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ : 04.02.2019 ಸಂಜೆ 5.30 ಗಂಟೆ
ಅರ್ಜಿಯನ್ನು ಸಲ್ಲಿಸಬೇಕಾದ ವಿಳಾಸ
ವಿಲೇಖನಾಧಿಕಾರಿಗಳು
ಲಘು ವ್ಯವಹಾರಗಳ ನ್ಯಾಯಾಲಯ
ನಗರ ಸಿವಿಲ್ ನ್ಯಾಯಾಲಯ ಸಂಕೀರ್ಣ
ಬೆಂಗಳೂರು-560009
ನೇಮಕಾತಿ ಪ್ರಕಟಣೆಗಾಗಿ ಇಲ್ಲಿ ಕ್ಲಿಕ್ಕಿಸಿ
© www.coastalhut.com
Coastal Hut is a popular job searching website of Karnataka state. CoastalHut.com publishes Free Job Alerts in related to Govt. Jobs, Banking Exams, Recruitment in Insurance Sectors, Vacancies in Public Sector Undertakings, Forest Department Jobs, Opportunities in Defense, Police Recruitment, PSC Recruitment, etc.
Disclaimer: This article has been published in Coastal Hut website for the public interest. Our team will takes an elaborate study before publishing any jobs in this website. Although candidates are strongly suggested for verifying all the required details carefully before applying for any posts published by CoastalHut Team. This site proudly designed, hosted and managed by Crust.